
ಅರ್ಚಕರು ಪೂಜೆ ನೆರವೇರಿಸಿ ಮಂಗಳಾರತಿಯನ್ನು ಮುಗಿಸಿ, ಸಾಲುಸಾಲಾಗಿ ಕೈ ಮುಗಿದು ನಿಂತಿದ್ದ ಭಕ್ತರಿಗೆ ಮಂಗಳಾರತಿ ನೀಡುತ್ತಿದ್ದರು. ಹತ್ತು ರೂಪಾಯಿಯ ನೋಟು ಕೊಟ್ಟವರಿಗೆ ಪ್ರಸಾದ, ಐದು ರೂಪಾಯಿ ಕೊಟ್ಟವರಿಗೆ ತೀರ್ಥವನ್ನು ಕೊಡುತ್ತಿದ್ದರು. ಬಿಟ್ಟಿ ಮಂಗಳಾರತಿ ತೆಗೆದುಕೊಳ್ಳುವವರನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದರು. ಎಲ್ಲ ಪೂಜೆ ಮುಗಿಸಿಕೊಂಡು ಬಂದ ಮುದಿ ಅರ್ಚಕರು, ದೇವಸ್ಥಾನದ ಕಂಬಕ್ಕೆ ಒರಗಿಕೊಂಡು ಧ್ಯಾನ ಮಾಡುತ್ತಿರುವವಳಂತೆ ಕುಳಿತುಕೊಂಡಿದ್ದ ಹುಡುಗಿಯ ಭುಜ ತಟ್ಟಿ ಭೂಮಿಕಾ, ತಗೋ ಈ ಪ್ರಸಾದ ಎಂದರು. ಆ ಕಡೆ ಈ ಕಡೆ ಕದಲಿದ ಆ ಹುಡುಗಿ ಕರೆಂಟು ಹೋದ ಬಳಿಕ ಮ್ಯಾಕ್ಸ್ ಹುಡುಕಲು ತಡವರಿಸುವಂತೆ ಅತ್ತಿತ್ತ ಕೈ ಬೀಸಿದಳು. ತಗೋಳಮ್ಮ ಇಲ್ಲೇ ಇದೆ ಎನ್ನುತ್ತ ಅರ್ಚಕರು ಪ್ರಸಾದವನ್ನು ಕೈಗಿಟ್ಟರು.
ಪ್ರಸಾದ ತಿನ್ನುತ್ತಾ ಅರ್ಚಕರನ್ನು ಕುರಿತು ಭೂಮಿಕಾ `ದೇವರ ಪ್ರಸಾದ ಎಂದು ಹೇಳ್ತಾರಲ್ಲ, ಅವನಿದಾನ? ಬರ್ತಾನಾ? ಕೈಗೆ ಸಿಗ್ತಾನಾ? ಕಣ್ಣಿಗೆ ಕಾಣ್ತಾನಾ> ಎಂದು ಪ್ರಶ್ನೆ ಹಾಕಿದಳು. ಅವಳ ಮುಗ್ಧ ಪ್ರಶ್ನೆಗೆ ಅರ್ಚಕರು ಸತ್ಯ ಎಂಬುದು ಜಗದಲ್ಲಿದ್ದಿದ್ದೇ ಆದಲ್ಲಿ ಆ ದೇವರು ಇದ್ದಾನೆ. ನಂಬಿ ಬೇಡಿಕೊಂಡರೆ ಬಂದೇ ಬರ್ತಾನೆ. ಸಿಕ್ಕೇ ಸಿಕ್ತಾನೆ. ಒಂದಲ್ಲ ಒಂದು ರೂಪದಲ್ಲಿ ಬಂದು ನಿನಗೂ ಬೆಳಕು ಕೊಡ್ತಾನಮ್ಮ ಎಂದು ಹೇಳಿ ತಲೆ ಸವರಿ ಎದ್ದು ಹೋದರು.
ತನಗೋಸ್ಕರ ದೇವರು ಬಂದೇ ಬರ್ತಾನೆ ಎನ್ನುವಂತಹ ನಂಬಿಕೆಯಲ್ಲಿಯೇ ಅವಳು ದೇವಸ್ಥಾನದ ದ್ವಾರ ಬಾಗಿಲು ಕಡೆಗೆ ಪಾದ ಬೆಳೆಸಿದಳು. ಭೂಮಿಕಾಳ ಬಾಳಲ್ಲಿ ಬೆಳಕು ಬರಲಿ ಎಂದು ದೇವರ ಬಳಿ ಪ್ರಾಥರ್ಿಸುತ್ತಾ ಅರ್ಚಕರು ದೂರದಿಂದ ಅವಳನ್ನು ವೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಯಾವುದೋ ಅವಸರದಲ್ಲಿ ಬಂದ ಯುವಕ ಭೂಮಿಕಾಳಿಗೆ ಡಿಕ್ಕಿ ಹೊಡೆದನು. ಆಯ ತಪ್ಪಿದ ಭೂಮಿಕ ಕೆಳಗೆ ಬಿದ್ದಳು. ಇದನ್ನು ನೋಡಿದ ಅರ್ಚಕರು ಓಡಿ ಬಂದು ಅವಳನ್ನೆಬ್ಬಿಸಿ ಆ ಯುವಕನಿಗೆ ಬೈಗುಳಗಳ ಮಜ್ಜನವನ್ನೇ ಮಾಡಿಸಿ ಬಿಟ್ಟರು.
ಮೇಲೆದ್ದು ನಿಂತುಕೊಂಡ ಭೂಮಿಕಾಳನ್ನು ಆ ಯುವಕ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ ಅವಳೊಬ್ಬಳು ಅದ್ಭುತ ಸುಂದರಿ. ಕತ್ತಲು ತುಂಬಿದ ಕಣ್ಣುಗಳಲ್ಲಿಯೂ ಕೂಡ ಜಿಂಕೆಯ ಕದಲಿಕೆ. ಅಮೃತ ತುಂಬಿದ ತುಟಿಗಳ ಮೇಲೆ ನರ್ತನ ಮಾಡುವ ಆ ನಗು, ಬೇಡ ಬೇಡವೆಂದರೂ ಬಾಗಿ ಕೆನ್ನೆಗೆ ಮುತ್ತಿಡುವ ಮುಂಗುರುಳುಗಳು, ಅಪ್ಪಟ ಅಪ್ಸರೆಯಂತೆ ಕಾಣುತ್ತಿದ್ದ ಭೂಮಿಕಾಳನ್ನು ನೋಡುತ್ತ ಯುವಕ ನಿಂತಲ್ಲಿಯೇ ಶಿಲೆಯಂತಾಗಿ ಹೋಗಿದ್ದ.
ಕಣ್ಣೆದುರಿಗಿದ್ದ ಚೆಲುವೆ ಕಣ್ಮರೆಯಾದ ನಂತರವೇ ಈತನಿಗೆ ವಾಸ್ತವ ಪ್ರಪಂಚದಲ್ಲಿದ್ದ ಅನುಭವವಾಗಿದ್ದು. ಆಗ ಪಕ್ಕದಲ್ಲಿದ್ದ ಅರ್ಚಕರನ್ನು ಕುರಿತು ಅರ್ಚಕರೆ ನಾನು ಬೇಕೆಂದು ಡಿಕ್ಕಿ ಹೊಡೆದಿಲ್ಲ. ತಪ್ಪಿ ಆಕಸ್ಮಿಕವಾಗಿ ಆಗಿ ಹೋಯಿತು ಕ್ಷಮಿಸಿ ಎಂದು ಕೈ ಮುಗಿದ.
ಆಗ ಅರ್ಚಕರು ಅಲ್ಲಪ್ಪಾ ಹೇಳಿ ಕೇಳಿ ಕಣ್ಣುಗಳಿಲ್ಲದ ಕುರುಡಿ ಹುಡುಗಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದೆಯಲ್ಲ ಸರೀನಾ ಎಂದು ಕೇಳುತ್ತಲೇ ದಿಗ್ಭ್ರಾಂತನಾಗಿಬಿಟ್ಟ. ಕಲ್ಪನೆಗೂ ಎಟುಕದಂತಹ ಸುಂದರ ಪ್ರತಿಮೆ ಅವಳು, ಆದರೆ ಕೆತ್ತಿದ ಕಲಾವಿದ ಕಣ್ಣುಗಳನ್ನು ಕೆತ್ತುವುದನ್ನೇ ಮರೆತಿದ್ದಾನಲ್ಲ ಎಂದುಕೊಂಡ ಯುವಕ ಮೌನಿಯಾಗಿ ಮುನ್ನಡೆದು ಬಿಟ್ಟ.
ಅಂದು ಮನಸ್ಸೆಂಬುದು ಸೂತಕದ ಮನೆಯಂತಾಗಿ ಬಿಟ್ಟಿತು. ನೋಡಿದ ಕ್ಷಣದಲ್ಲಿಯೇ ಪ್ರೀತಿಯ ಒರತೆ ಚಿಮ್ಮಿಸಿದ ಚಿತ್ತ ಚೋರಿಯವಳು. ಪಥ ಬದಲಿಸುವ ಕ್ಷಣದಲ್ಲಿ ಆಯ ತಪ್ಪಿ ಧರಣಿಗೆ ಬಿದ್ದ ನಕ್ಷತ್ರ ಅವಳು. ಆದರೆ ಅದರಲ್ಲಿ ಹೊಳಪಿಲ್ಲ ಎನ್ನುವ ಕೊರಗು ಅವನನ್ನು ಕಾಡುತ್ತಿತ್ತು. ಅವಳ ಅಪ್ಸರೆಯಂತಹ ರೂಪ ಅವನನ್ನು ಬೆರಗುಗೊಳಿಸಿದ್ದರೆ, ಕಣ್ಣುಗಳಿಲ್ಲ ಎಂಬುದು ಅವನನ್ನು ಬೇಸರಗೊಳಿಸುತ್ತಿತ್ತು. ಹೇಗಾದರಾಲಿ ನಾಳೆ ಅವಳನ್ನು ಮಾತಾಡಿಸಬೇಕು. ಆಕಸ್ಮಿಕವಾಗಿ ಆದ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದನು.
ಬೆಳಿಗ್ಗೆ ಎದ್ದು ಕಾಂತಿಹೀನವಾಗಿದ್ದ ಕಣ್ಣುಗಳಲ್ಲಿ ಚೇತನವನ್ನು ಮೂಡಿಸುವ ಮಹದಾಶೆ ಇಟ್ಟುಕೊಂಡು ಯುವಕ ದೇವಸ್ಥಾನಕ್ಕೆ ಹೋದನು. ಸುತ್ತ ಹುಡುಕಿದ. ಒಂದು ಕಂಬಕ್ಕೆ ಒರಗಿ ಕುಳಿತುಕೊಂಡ ಸುಂದರ ಮೂತರ್ಿಯಂತೆ ಹುಡುಗಿ ಕುಳಿತಿದ್ದಳು. ಹತ್ತಿರ ಹೋದ ಯುವಕ ಅವಳನ್ನು ಕುರಿತು ಕೇಳಿ ಇವರೇ, ನಾನು ನಿನ್ನೆ ನಿಮಗೆ ಡಿಕ್ಕಿ ಹೊಡೆದದ್ದು ಅನಿರೀಕ್ಷಿತವಾಗಿ. ಅದರಿಂದ ನನಗೆ ತುಂಬ ಬೇಸರವಾಗಿದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡನು. ಮುಗುಳ್ನುಗುತ್ತ ಹುಡುಗಿ, ಅಯ್ಯೋ ಅದರಲ್ಲಿ ನಿಮ್ಮದೇನು ತಪ್ಪಿದೆ. ತಪ್ಪೆಲ್ಲ ನನ್ನದೇ, ಕಣ್ಣು ಕಾಣದ ನಾನು ಹೇಗಿರಬೇಕೊ ಹಾಗಿದ್ದರೆ ತಾನೆ ಚಂದ. ಕಾಣದೆ ಬಂದು ಡಿಕ್ಕಿ ಹೊಡೆದೆ. ದಯವಿಟ್ಟು ಕ್ಷಮಿಸಿ ಎಂದು ಹತಾಶೆಯಿಂದ ನುಡಿದಳು. ಅವಳ ಬಾಡಿದ ಮೊಗವನ್ನು ನೋಡಿದ ಯುವಕ, ಇದರಲ್ಲಿ ಯಾರದು ತಪ್ಪಿಲ್ಲ ಹೋಗ್ಲಿ ಬಿಡಿ. ಇನ್ನು ಮುಂದೆ ನಾವಿಬ್ಬರು ಸ್ನೇಹಿತರಾಗಿರೋಣ ಎಂದ.
ಸ್ವಲ್ಪ ಕ್ಷಣ ಸುಮ್ಮನಿದ್ದ ಹುಡುಗಿ, `ನಾನು, ನಾನೇ ಹೇಗಿದ್ದೀನಿ ಎಂಬುದು ತಿಳಿದುಕೊಳ್ಳದಂತಹ, ನೋಡಿಕೊಳ್ಳದಂತಹ ನತದೃಷ್ಟೆ. ಇನ್ನೂ ನಿಮ್ಮನ್ನು ನೋಡದೆ ನಾನು ಹೇಗೆ ಗೆಳೆತನ ಮಾಡಲಿ ಎಂದು ಕೇಳಿದಳು. ಆಗ ಅವಳನ್ನೇ ದಿಟ್ಟಿಸುತ್ತ `ಕತ್ತಲೆಂಬುದು ನಿಮ್ಮ ಕಣ್ಣುಗಳಿಗಿವೆ ಹೊರತು ಮನಸ್ಸಿಗಲ್ಲ. ಬಾಹ್ಯ ಕಣ್ಣುಗಳು ಇಲ್ಲದಿದ್ದರೇನಂತೆ ಅಂತರಂಗದ ಕಣ್ಣುಗಳಿಗೆಲ್ಲ ಕಾಣುವುದಲ್ಲಎಂದು ಹೇಳಿದನು. ಅವನ ಮಾತಿಗೆ ಮುಗುಳ್ನಗುತ್ತ ನಿಮ್ಮ ಹೆಸರೇನು ಎಂದು ಕೇಳಿದಳು.
ನನ್ನ ಹೆಸರು ಹೇಮಂತ. ನಾನೊಬ್ಬ ನಿರುದ್ಯೋಗಿ. ಆದರೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ದೊಡ್ಡ ಕನಸುಗಳನ್ನು ಕಾಣುವ ಕನಸುಗಾರ. ನಿಮ್ಮ ಹೆಸರೇನು? ಎಂದು ಕೇಳಿದನು.
ಭೂಮಿ ಹೇಗಿರುತ್ತದೆ ಎಂಬ ಸಣ್ಣ ಕಲ್ಪನೆ ಇಲ್ಲದಿದ್ದರೂ ಕೂಡ ಹೆತ್ತವರು ಭೂಮಿಕಾ ಎಂದು ಹೆಸರಿಟ್ಟರು. ಹೆಸರಿಟ್ಟದ್ದೇ ತಪ್ಪೇನೋ ಎನ್ನುವಂತೆ ಭೂಮಿಯನ್ನು ನೋಡದಂತ ಕುರುಡಿಯಾಗಿ ಬಿಟ್ಟೆ ಎಂದು ಹೇಳಿದಳು.
`ಭೂಮಿಕಾ ಅದ್ಭುತವಾದ ಹೆಸರು. ಹೆಸರಿಗೆ ತಕ್ಕಂತೆ ನೀನು ಕೂಡ ಭೂಮಿ ತೂಕದವಳೇ ಆಗಿದ್ದೀಯಾ ಎಂದು ನಕ್ಕನು.
ಹೀಗೆ ಸ್ನೇಹತರಾದ ಇವರಿಬ್ಬರು ಸುತ್ತದ ಸ್ಥಳಗಳೇ ಇರಲಿಲ್ಲ. ಸೂರ್ಯ-ಚಂದ್ರರ ಕಲ್ಪನೆಯನ್ನು ಅವಳ ಮನ ಮುಟ್ಟುವಂತೆ ತಿಳಿಸುತ್ತಿದ್ದ ಹೇಮಂತ, ಕಣ್ಣಿಲ್ಲದ ಅವಳಿಗೆ ಕಣ್ಣಾಗಿ ಜಗದ ಸೌಂದರ್ಯವನ್ನು ವರ್ಣನೆಯ ಮೂಲಕ ತಿಳಿಸುತ್ತಿದ್ದ. ಹೀಗೆ ಅವಳಿಗೆ ದೃಷ್ಟಿ ಕಾಣದ ಕೊರತೆಯನ್ನೇ ನೀಗಿಸಿಬಿಟ್ಟ. ದಿನ ಕಳೆದಂತೆ ಇಬ್ಬರ ಮನದಲ್ಲಿ ಸ್ನೇಹದ ಮುಂದುವರಿದ ಅಧ್ಯಾಯವಾಗಿ ಪ್ರೀತಿಯ ಪುಟಗಳು ತೆರೆದುಕೊಳ್ಳುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ. ಅದು ಇದೂ ಮಾತನಾಡುತ್ತ ಒಂದು ಬಾರಿ ಭೂಮಿಕಾ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದಳು. ಹೇಮಂತ, ನಾನು ಸಾಯುವ ಮೊದಲು ಒಂದು ಬಾರಿಯಾದರೂ ಈ ಜಗತ್ತನ್ನು ನೋಡುತ್ತೇನಾ? ಎಂದು ಕೇಳಿದಳು. ಅವಳ ಮಾತಿಗೆ ಪ್ರತಿಕ್ರಿಯಿಸುತ್ತ, ಖಂಡಿತಾ ನೋಡುತ್ತೀಯಾ ಕಣೇ ನಾನಿದ್ದೀನಿ, ನಾನು ನಿನ್ನ ಕಣ್ಣಿಗೆ ಬೆಳಕನ್ನು ನೀಡುತ್ತೇನೆ ಚಿನ್ನು, ಚೆನ್ನಾಗಿರು ಎಂದು ಹೇಳಿದನು.
ಅವನ ಮಾತಿಗೆ ಖುಷಿಯಾದ ಭೂಮಿಕಾ, ಅಮ್ಮನ ಸಾಂತ್ವಾನಕ್ಕೆ ಸಮಾಧಾನಗೊಳ್ಳುವ ಹಾಗೆ ಅವನೆದೆಗೆ ತಲೆ ಇಟ್ಟು ಸಂತಸ ವ್ಯಕ್ತಪಡಿಸಿದಳು. ನಂತರ ಅವಳನ್ನು ಕರೆದುಕೊಂಡು ಎಲ್ಲ ಆಸ್ಪತ್ರೆಗಳನ್ನು ಸುತ್ತಿದ್ದಾಯಿತು. ಪ್ರಯೋಜನವಾಗಲಿಲ್ಲ. ಯಾರಾದರೂ ಕಣ್ಣುಗಳನ್ನು ಕೊಟ್ಟಿದ್ದೇ ಆದಲ್ಲಿ ಮಾತ್ರ ಅವಳಿಗೆ ಕಣ್ಣುಗಳು ಬರುತ್ತವೆ. ಇಲ್ಲದಿದ್ದರೆ ಇಲ್ಲ. ಜೀವನ ಪರ್ಯಂತ ಹೀಗೆಯೇ ಇರಬೇಕೆಂದು ವೈದ್ಯರು ಕೈ ಚೆಲ್ಲಿಬಿಟ್ಟರು. ದಿನೇ ದಿನೇ ಅವಳ ಮನಸಲ್ಲಿ ನನಗೆ ಕಣ್ಣು ಬರುವುದಿಲ್ಲ ಎಂದುಕೊಳ್ಳುತೊಡಗಿದಳು. ಹೇಮಂತನನ್ನು ಕುರಿತು `ಥೂ, ಈ ಹಾಳು ಜೀವನ ಯಾರಿಗಾದರು ಬೇಕು. ಜೀವನ ಪರ್ಯಂತ ಕತ್ತಲಲ್ಲಿ ಬದುಕುವ ಕಷ್ಟದ ಜೀವನ ಯಾರಿಗೆ ಬೇಕು. ಹಗಲು ರಾತ್ರಿಯ ಪರಿವೆಯೂ ಕೂಡ ಇಲ್ಲದ ಈ ಜೀವನ ಯಾತಕ್ಕೆ ಬೇಕು. ಕುರುಡ, ಕಣ್ಣು ಕಾಣುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣ ಗುಂಡಿಟ್ಟು ಕೊಂದು ಬಿಡಬೇಕು ಎಂದು ಗುಡುಗಿದಳು. ಬೇಸರ ವ್ಯಕ್ತಪಡಿಸಿ ಅತ್ತಳು. ಕೊನೆಗೆ ನನ್ನ ಜೀವನ ಇಷ್ಟೇ ಎನ್ನುವ ನಿಧರ್ಾರಕ್ಕೆ ಬಂದು ಮಂಕಾಗಿ ಬಿಟ್ಟಳು.
ಕೆಲವು ದಿನಗಳು ಕಳೆದವು. ಓಡಿ ಬಂದ ಹೇಮಂತ ನಾಳೆ ಆಸ್ಪತ್ರೆಗೆ ಹೋಗೋಣ. ಮಾರನೇ ದಿನವೇ ನಿನಗೆ ಕಣ್ಣಿನ ಆಪರೇಷನ್ ಮಾಡುತ್ತೇನೆ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ತಿಳಿಸಿದ. ವಿಷಯ ತಿಳಿದ ಭೂಮಿಕಾಳ ಸಂತಸಕಕೆ ಪಾರವೇ ಇರಲಿಲ್ಲ. ಅತ್ತಿತ್ತ ಸುತ್ತಾಡಿದ ಹೇಮಂತ ಹಾಗೂ ಹೀಗೂ ದುಡ್ಡು ಹೊಂದಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದನು. ಭೂಮಿಕಾಳಿಗೆ ಕಣ್ಣು ಬರುವ ಸಂತಸ ಒಂದೆಡೆಯಿದ್ದರೆ, ಅವನ ಮುಖದಲ್ಲಿ ಕಣ್ಣಲ್ಲಿ ಒಂದು ತರಹದ ನಿಸ್ತೇಜತೆ ಎದ್ದು ಕಾಣುತ್ತಿತ್ತು. ಆಗ ಭೂಮಿಕಾಳನ್ನು ಕುರಿತು ಅಮ್ಮನಿಗೆ ಊರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರಂತೆ ಅವರನ್ನು ಕಾಣಬೇಕೆಂದು ಊರಿಂದ ಕರೆ ಬಂದಿದೆ. ಹೋಗಿ ಬೇಗ ಬರುತ್ತೇನೆ ಧೈರ್ಯವಾಗಿರು ಎಂದು ಸಮಾಧಾನ ಹೇಳಿ ಹೋದನು.
ಮರುದಿನವೇ ಭೂಮಿಕಾಳ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯಿತು. ಆದರೆ ಹೋದ ಹೇಮಂತ ಬರಲೇ ಇಲ್ಲ. ದಿನಗಳು ಉರುಳಿದವು. ಕಣ್ಣಿನ ಪಟ್ಟಿ ಬಿಚ್ಚಬೇಕು ಎಂದು ಡಾಕ್ಟರ್ ಹೇಳಿದರು.ಹೇಮಂತನ ಸುಳಿವೇ ಇಲ್ಲ. ಅನಿವಾರ್ಯ ಅವನ ಅನುಪಸ್ಥಿತಿಯಲ್ಲಿಯೂ ಕಣ್ಣಿನ ಪಟ್ಟಿ ಕಳಚಲೇ ಬೇಕಾಗಿತ್ತು. ಹೀಗಾಗಿ ಡಾಕ್ಟರ್ ಬಿಚ್ಚಿಯೆ ಬಿಟ್ಟರು. ಆದರೆ ಹೇಮಂತ ಕಾಣಲಿಲ್ಲ. ಅವನಿಗಾಗಿ ಕಾದು ಕಾದು ಸಾಕಾಯಿತು. ಕೊನೆಗೆ ಡಿಸ್ಚಾಜರ್್ ಆಗಿ ಹೊರಡಲು ಅಣಿಯಾದರೂ ಹೇಮಂತ ಬರಲಿಲ್ಲ. ಆಗ ನಸರ್್ ಒಂದು ಪತ್ರವನ್ನು ಕೈಗೆ ಕೊಟ್ಟು ಹೋದಳು. ಬಿಚ್ಚಿ ಓದಿದರೆ ಆಘಾತ ಕಾದಿತ್ತು. `ಭೂಮಿಕಾ ನೀನು ದೇವಲೋಕದ ಅಪ್ಸರೆ. ನಿನ್ನಲ್ಲಿದ್ದ ಒಂದೇ ಒಂದು ಕೊರತೆ ಎಂದರೇ ದೃಷ್ಟಿ ಇಲ್ಲದಿರುವುದು. ನೀನು ಈ ಪತ್ರ ಓದುವ ಹೊತ್ತಿಗೆ ಬೆಳಕು ತುಂಬಿದ ಕಣ್ಣುಗಳಿಂದ ನಳನಳಿಸುತ್ತಿರುತ್ತೀಯಾ. ಇಲ್ಲಿಯವರೆಗೂ ನೀನು ಕತ್ತಲಲ್ಲಿ ಬದುಕಿ ಕುರುಡುತನಕ್ಕೆ ರೋಸಿ ಹೋಗಿದ್ದೀಯಾ. ಕುರುಡುತನದ ಮೇಲೆ ಮತ್ಸರವಿದೆ. ಹೀಗಾಗಿ ನೀನೊಬ್ಬ ಕುರುಡನ ಜೊತೆಗೆ ಬದುಕು ಸಾಗಿಸಲು ಸಾಧ್ಯವಾಗುವುದಿಲ್ಲ. ಬಿದಿಗೆ ಚಂದ್ರನಂತಿರುವ ನಿನ್ನ ಬಾಳಿನಲ್ಲಿ ಅಮಾವಾಸ್ಯೆ ಕತ್ತಲೆಯಂತೆ ನಾನು ಬರುವುದು ನಿನಗೆ ಇಷ್ಟವಾಗದಿರಬಹುದು ಎಂದು ಕೊಂಡು ನಿನ್ನಿಂದ ಬಹುದೂರ ಹೋಗುತ್ತಿದ್ದೇನೆ. ಆದರೆ ನಿನ್ನಲ್ಲಿ ಕ್ಷಮಿಸು. ಆದರೆ ನಿನ್ನಲ್ಲಿ ನನ್ನದೊಂದು ಸಣ್ಣ ಕೋರಿಕೆ. ನಡೆಸಿಕೊಡ್ತಿಯಲ್ವಾ? ಅದೇನ ಗೊತ್ತಾ? ಇಲ್ಲಿಯವರೆಗೂ ಜಗದ ಬೆಳಕಿನ ಸವಿ ಉಂಡ ನನ್ನ ಕಣ್ಣುಗಳು ಇಂದು ಪ್ರೀತಿಯ ಕಾಣಿಕೆಯಾಗಿ ನಿನಗೆ ನೀಡಿದ್ದೇನೆ. ಕಣ್ಗಳ ರೂಪದಲ್ಲಿ ಸದಾ ನಿನ್ನ ಜೊತೆ ಇರುತ್ತೇನೆ. ಸರಿಯಾಗಿ ನೋಡಿಕೊ ಚಿನ್ನು ಪ್ಲೀಸ್ ಎಂದು ಬರೆದ ಸಾಲುಗಳನ್ನು ಓದಿದ ತಕ್ಷಣ ಮೊದಲ ಬಾರಿಗೆ ಬೆಳಕು ಕಂಡುಕೊಂಡ ಕಣ್ಣುಗಳಿಂದ ಹನಿಗಳು ಧರೆಗಿಳಿದವು. ಅಷ್ಟರಲ್ಲಿ ಸುಂದರ ಮುಖದ ಕುರುಡನೊಬ್ಬ ನಡೆದು ಹೋದದ್ದು ಗೋಚರಿಸಿತು. ಅಂದಿನಿಂದ ಭೂಮಿಕಾ ತನ್ನ ಬಾಳಿಗೆ ಬೆಳಕು ನೀಡಿದ ಹೇಮಂತನ ಮುಖವನ್ನು ಪ್ರತಿ ಕುರುಡನ ಮುಖದಲ್ಲೂ ಹುಡುಕುತ್ತಿದ್ದಾಳೆ. ಇಲ್ಲಿಯವರೆಗೂ ಹೇಮಂತ ಸಿಗಲೇ ಇಲ್ಲ.... ಆ ಕಣ್ಗಳ ಹುಡುಕಾಟಕ್ಕೆ ಕೊನೆಯೇ ಇಲ್ಲ. ಕುರುಡು ಪ್ರೀತಿಯೆಂದರೆ ಇದೇನಾ
ಪ್ರಸಾದ ತಿನ್ನುತ್ತಾ ಅರ್ಚಕರನ್ನು ಕುರಿತು ಭೂಮಿಕಾ `ದೇವರ ಪ್ರಸಾದ ಎಂದು ಹೇಳ್ತಾರಲ್ಲ, ಅವನಿದಾನ? ಬರ್ತಾನಾ? ಕೈಗೆ ಸಿಗ್ತಾನಾ? ಕಣ್ಣಿಗೆ ಕಾಣ್ತಾನಾ> ಎಂದು ಪ್ರಶ್ನೆ ಹಾಕಿದಳು. ಅವಳ ಮುಗ್ಧ ಪ್ರಶ್ನೆಗೆ ಅರ್ಚಕರು ಸತ್ಯ ಎಂಬುದು ಜಗದಲ್ಲಿದ್ದಿದ್ದೇ ಆದಲ್ಲಿ ಆ ದೇವರು ಇದ್ದಾನೆ. ನಂಬಿ ಬೇಡಿಕೊಂಡರೆ ಬಂದೇ ಬರ್ತಾನೆ. ಸಿಕ್ಕೇ ಸಿಕ್ತಾನೆ. ಒಂದಲ್ಲ ಒಂದು ರೂಪದಲ್ಲಿ ಬಂದು ನಿನಗೂ ಬೆಳಕು ಕೊಡ್ತಾನಮ್ಮ ಎಂದು ಹೇಳಿ ತಲೆ ಸವರಿ ಎದ್ದು ಹೋದರು.
ತನಗೋಸ್ಕರ ದೇವರು ಬಂದೇ ಬರ್ತಾನೆ ಎನ್ನುವಂತಹ ನಂಬಿಕೆಯಲ್ಲಿಯೇ ಅವಳು ದೇವಸ್ಥಾನದ ದ್ವಾರ ಬಾಗಿಲು ಕಡೆಗೆ ಪಾದ ಬೆಳೆಸಿದಳು. ಭೂಮಿಕಾಳ ಬಾಳಲ್ಲಿ ಬೆಳಕು ಬರಲಿ ಎಂದು ದೇವರ ಬಳಿ ಪ್ರಾಥರ್ಿಸುತ್ತಾ ಅರ್ಚಕರು ದೂರದಿಂದ ಅವಳನ್ನು ವೀಕ್ಷಿಸುತ್ತಿದ್ದರು. ಅಷ್ಟರಲ್ಲಿ ಯಾವುದೋ ಅವಸರದಲ್ಲಿ ಬಂದ ಯುವಕ ಭೂಮಿಕಾಳಿಗೆ ಡಿಕ್ಕಿ ಹೊಡೆದನು. ಆಯ ತಪ್ಪಿದ ಭೂಮಿಕ ಕೆಳಗೆ ಬಿದ್ದಳು. ಇದನ್ನು ನೋಡಿದ ಅರ್ಚಕರು ಓಡಿ ಬಂದು ಅವಳನ್ನೆಬ್ಬಿಸಿ ಆ ಯುವಕನಿಗೆ ಬೈಗುಳಗಳ ಮಜ್ಜನವನ್ನೇ ಮಾಡಿಸಿ ಬಿಟ್ಟರು.
ಮೇಲೆದ್ದು ನಿಂತುಕೊಂಡ ಭೂಮಿಕಾಳನ್ನು ಆ ಯುವಕ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ ಅವಳೊಬ್ಬಳು ಅದ್ಭುತ ಸುಂದರಿ. ಕತ್ತಲು ತುಂಬಿದ ಕಣ್ಣುಗಳಲ್ಲಿಯೂ ಕೂಡ ಜಿಂಕೆಯ ಕದಲಿಕೆ. ಅಮೃತ ತುಂಬಿದ ತುಟಿಗಳ ಮೇಲೆ ನರ್ತನ ಮಾಡುವ ಆ ನಗು, ಬೇಡ ಬೇಡವೆಂದರೂ ಬಾಗಿ ಕೆನ್ನೆಗೆ ಮುತ್ತಿಡುವ ಮುಂಗುರುಳುಗಳು, ಅಪ್ಪಟ ಅಪ್ಸರೆಯಂತೆ ಕಾಣುತ್ತಿದ್ದ ಭೂಮಿಕಾಳನ್ನು ನೋಡುತ್ತ ಯುವಕ ನಿಂತಲ್ಲಿಯೇ ಶಿಲೆಯಂತಾಗಿ ಹೋಗಿದ್ದ.
ಕಣ್ಣೆದುರಿಗಿದ್ದ ಚೆಲುವೆ ಕಣ್ಮರೆಯಾದ ನಂತರವೇ ಈತನಿಗೆ ವಾಸ್ತವ ಪ್ರಪಂಚದಲ್ಲಿದ್ದ ಅನುಭವವಾಗಿದ್ದು. ಆಗ ಪಕ್ಕದಲ್ಲಿದ್ದ ಅರ್ಚಕರನ್ನು ಕುರಿತು ಅರ್ಚಕರೆ ನಾನು ಬೇಕೆಂದು ಡಿಕ್ಕಿ ಹೊಡೆದಿಲ್ಲ. ತಪ್ಪಿ ಆಕಸ್ಮಿಕವಾಗಿ ಆಗಿ ಹೋಯಿತು ಕ್ಷಮಿಸಿ ಎಂದು ಕೈ ಮುಗಿದ.
ಆಗ ಅರ್ಚಕರು ಅಲ್ಲಪ್ಪಾ ಹೇಳಿ ಕೇಳಿ ಕಣ್ಣುಗಳಿಲ್ಲದ ಕುರುಡಿ ಹುಡುಗಿಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದೆಯಲ್ಲ ಸರೀನಾ ಎಂದು ಕೇಳುತ್ತಲೇ ದಿಗ್ಭ್ರಾಂತನಾಗಿಬಿಟ್ಟ. ಕಲ್ಪನೆಗೂ ಎಟುಕದಂತಹ ಸುಂದರ ಪ್ರತಿಮೆ ಅವಳು, ಆದರೆ ಕೆತ್ತಿದ ಕಲಾವಿದ ಕಣ್ಣುಗಳನ್ನು ಕೆತ್ತುವುದನ್ನೇ ಮರೆತಿದ್ದಾನಲ್ಲ ಎಂದುಕೊಂಡ ಯುವಕ ಮೌನಿಯಾಗಿ ಮುನ್ನಡೆದು ಬಿಟ್ಟ.
ಅಂದು ಮನಸ್ಸೆಂಬುದು ಸೂತಕದ ಮನೆಯಂತಾಗಿ ಬಿಟ್ಟಿತು. ನೋಡಿದ ಕ್ಷಣದಲ್ಲಿಯೇ ಪ್ರೀತಿಯ ಒರತೆ ಚಿಮ್ಮಿಸಿದ ಚಿತ್ತ ಚೋರಿಯವಳು. ಪಥ ಬದಲಿಸುವ ಕ್ಷಣದಲ್ಲಿ ಆಯ ತಪ್ಪಿ ಧರಣಿಗೆ ಬಿದ್ದ ನಕ್ಷತ್ರ ಅವಳು. ಆದರೆ ಅದರಲ್ಲಿ ಹೊಳಪಿಲ್ಲ ಎನ್ನುವ ಕೊರಗು ಅವನನ್ನು ಕಾಡುತ್ತಿತ್ತು. ಅವಳ ಅಪ್ಸರೆಯಂತಹ ರೂಪ ಅವನನ್ನು ಬೆರಗುಗೊಳಿಸಿದ್ದರೆ, ಕಣ್ಣುಗಳಿಲ್ಲ ಎಂಬುದು ಅವನನ್ನು ಬೇಸರಗೊಳಿಸುತ್ತಿತ್ತು. ಹೇಗಾದರಾಲಿ ನಾಳೆ ಅವಳನ್ನು ಮಾತಾಡಿಸಬೇಕು. ಆಕಸ್ಮಿಕವಾಗಿ ಆದ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದನು.
ಬೆಳಿಗ್ಗೆ ಎದ್ದು ಕಾಂತಿಹೀನವಾಗಿದ್ದ ಕಣ್ಣುಗಳಲ್ಲಿ ಚೇತನವನ್ನು ಮೂಡಿಸುವ ಮಹದಾಶೆ ಇಟ್ಟುಕೊಂಡು ಯುವಕ ದೇವಸ್ಥಾನಕ್ಕೆ ಹೋದನು. ಸುತ್ತ ಹುಡುಕಿದ. ಒಂದು ಕಂಬಕ್ಕೆ ಒರಗಿ ಕುಳಿತುಕೊಂಡ ಸುಂದರ ಮೂತರ್ಿಯಂತೆ ಹುಡುಗಿ ಕುಳಿತಿದ್ದಳು. ಹತ್ತಿರ ಹೋದ ಯುವಕ ಅವಳನ್ನು ಕುರಿತು ಕೇಳಿ ಇವರೇ, ನಾನು ನಿನ್ನೆ ನಿಮಗೆ ಡಿಕ್ಕಿ ಹೊಡೆದದ್ದು ಅನಿರೀಕ್ಷಿತವಾಗಿ. ಅದರಿಂದ ನನಗೆ ತುಂಬ ಬೇಸರವಾಗಿದೆ ದಯವಿಟ್ಟು ಕ್ಷಮಿಸಿ ಎಂದು ಕೇಳಿಕೊಂಡನು. ಮುಗುಳ್ನುಗುತ್ತ ಹುಡುಗಿ, ಅಯ್ಯೋ ಅದರಲ್ಲಿ ನಿಮ್ಮದೇನು ತಪ್ಪಿದೆ. ತಪ್ಪೆಲ್ಲ ನನ್ನದೇ, ಕಣ್ಣು ಕಾಣದ ನಾನು ಹೇಗಿರಬೇಕೊ ಹಾಗಿದ್ದರೆ ತಾನೆ ಚಂದ. ಕಾಣದೆ ಬಂದು ಡಿಕ್ಕಿ ಹೊಡೆದೆ. ದಯವಿಟ್ಟು ಕ್ಷಮಿಸಿ ಎಂದು ಹತಾಶೆಯಿಂದ ನುಡಿದಳು. ಅವಳ ಬಾಡಿದ ಮೊಗವನ್ನು ನೋಡಿದ ಯುವಕ, ಇದರಲ್ಲಿ ಯಾರದು ತಪ್ಪಿಲ್ಲ ಹೋಗ್ಲಿ ಬಿಡಿ. ಇನ್ನು ಮುಂದೆ ನಾವಿಬ್ಬರು ಸ್ನೇಹಿತರಾಗಿರೋಣ ಎಂದ.
ಸ್ವಲ್ಪ ಕ್ಷಣ ಸುಮ್ಮನಿದ್ದ ಹುಡುಗಿ, `ನಾನು, ನಾನೇ ಹೇಗಿದ್ದೀನಿ ಎಂಬುದು ತಿಳಿದುಕೊಳ್ಳದಂತಹ, ನೋಡಿಕೊಳ್ಳದಂತಹ ನತದೃಷ್ಟೆ. ಇನ್ನೂ ನಿಮ್ಮನ್ನು ನೋಡದೆ ನಾನು ಹೇಗೆ ಗೆಳೆತನ ಮಾಡಲಿ ಎಂದು ಕೇಳಿದಳು. ಆಗ ಅವಳನ್ನೇ ದಿಟ್ಟಿಸುತ್ತ `ಕತ್ತಲೆಂಬುದು ನಿಮ್ಮ ಕಣ್ಣುಗಳಿಗಿವೆ ಹೊರತು ಮನಸ್ಸಿಗಲ್ಲ. ಬಾಹ್ಯ ಕಣ್ಣುಗಳು ಇಲ್ಲದಿದ್ದರೇನಂತೆ ಅಂತರಂಗದ ಕಣ್ಣುಗಳಿಗೆಲ್ಲ ಕಾಣುವುದಲ್ಲಎಂದು ಹೇಳಿದನು. ಅವನ ಮಾತಿಗೆ ಮುಗುಳ್ನಗುತ್ತ ನಿಮ್ಮ ಹೆಸರೇನು ಎಂದು ಕೇಳಿದಳು.
ನನ್ನ ಹೆಸರು ಹೇಮಂತ. ನಾನೊಬ್ಬ ನಿರುದ್ಯೋಗಿ. ಆದರೆ ಚಿಕ್ಕಪುಟ್ಟ ಕೆಲಸಗಳನ್ನು ಮಾಡುತ್ತ ದೊಡ್ಡ ಕನಸುಗಳನ್ನು ಕಾಣುವ ಕನಸುಗಾರ. ನಿಮ್ಮ ಹೆಸರೇನು? ಎಂದು ಕೇಳಿದನು.
ಭೂಮಿ ಹೇಗಿರುತ್ತದೆ ಎಂಬ ಸಣ್ಣ ಕಲ್ಪನೆ ಇಲ್ಲದಿದ್ದರೂ ಕೂಡ ಹೆತ್ತವರು ಭೂಮಿಕಾ ಎಂದು ಹೆಸರಿಟ್ಟರು. ಹೆಸರಿಟ್ಟದ್ದೇ ತಪ್ಪೇನೋ ಎನ್ನುವಂತೆ ಭೂಮಿಯನ್ನು ನೋಡದಂತ ಕುರುಡಿಯಾಗಿ ಬಿಟ್ಟೆ ಎಂದು ಹೇಳಿದಳು.
`ಭೂಮಿಕಾ ಅದ್ಭುತವಾದ ಹೆಸರು. ಹೆಸರಿಗೆ ತಕ್ಕಂತೆ ನೀನು ಕೂಡ ಭೂಮಿ ತೂಕದವಳೇ ಆಗಿದ್ದೀಯಾ ಎಂದು ನಕ್ಕನು.
ಹೀಗೆ ಸ್ನೇಹತರಾದ ಇವರಿಬ್ಬರು ಸುತ್ತದ ಸ್ಥಳಗಳೇ ಇರಲಿಲ್ಲ. ಸೂರ್ಯ-ಚಂದ್ರರ ಕಲ್ಪನೆಯನ್ನು ಅವಳ ಮನ ಮುಟ್ಟುವಂತೆ ತಿಳಿಸುತ್ತಿದ್ದ ಹೇಮಂತ, ಕಣ್ಣಿಲ್ಲದ ಅವಳಿಗೆ ಕಣ್ಣಾಗಿ ಜಗದ ಸೌಂದರ್ಯವನ್ನು ವರ್ಣನೆಯ ಮೂಲಕ ತಿಳಿಸುತ್ತಿದ್ದ. ಹೀಗೆ ಅವಳಿಗೆ ದೃಷ್ಟಿ ಕಾಣದ ಕೊರತೆಯನ್ನೇ ನೀಗಿಸಿಬಿಟ್ಟ. ದಿನ ಕಳೆದಂತೆ ಇಬ್ಬರ ಮನದಲ್ಲಿ ಸ್ನೇಹದ ಮುಂದುವರಿದ ಅಧ್ಯಾಯವಾಗಿ ಪ್ರೀತಿಯ ಪುಟಗಳು ತೆರೆದುಕೊಳ್ಳುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ. ಅದು ಇದೂ ಮಾತನಾಡುತ್ತ ಒಂದು ಬಾರಿ ಭೂಮಿಕಾ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದಳು. ಹೇಮಂತ, ನಾನು ಸಾಯುವ ಮೊದಲು ಒಂದು ಬಾರಿಯಾದರೂ ಈ ಜಗತ್ತನ್ನು ನೋಡುತ್ತೇನಾ? ಎಂದು ಕೇಳಿದಳು. ಅವಳ ಮಾತಿಗೆ ಪ್ರತಿಕ್ರಿಯಿಸುತ್ತ, ಖಂಡಿತಾ ನೋಡುತ್ತೀಯಾ ಕಣೇ ನಾನಿದ್ದೀನಿ, ನಾನು ನಿನ್ನ ಕಣ್ಣಿಗೆ ಬೆಳಕನ್ನು ನೀಡುತ್ತೇನೆ ಚಿನ್ನು, ಚೆನ್ನಾಗಿರು ಎಂದು ಹೇಳಿದನು.
ಅವನ ಮಾತಿಗೆ ಖುಷಿಯಾದ ಭೂಮಿಕಾ, ಅಮ್ಮನ ಸಾಂತ್ವಾನಕ್ಕೆ ಸಮಾಧಾನಗೊಳ್ಳುವ ಹಾಗೆ ಅವನೆದೆಗೆ ತಲೆ ಇಟ್ಟು ಸಂತಸ ವ್ಯಕ್ತಪಡಿಸಿದಳು. ನಂತರ ಅವಳನ್ನು ಕರೆದುಕೊಂಡು ಎಲ್ಲ ಆಸ್ಪತ್ರೆಗಳನ್ನು ಸುತ್ತಿದ್ದಾಯಿತು. ಪ್ರಯೋಜನವಾಗಲಿಲ್ಲ. ಯಾರಾದರೂ ಕಣ್ಣುಗಳನ್ನು ಕೊಟ್ಟಿದ್ದೇ ಆದಲ್ಲಿ ಮಾತ್ರ ಅವಳಿಗೆ ಕಣ್ಣುಗಳು ಬರುತ್ತವೆ. ಇಲ್ಲದಿದ್ದರೆ ಇಲ್ಲ. ಜೀವನ ಪರ್ಯಂತ ಹೀಗೆಯೇ ಇರಬೇಕೆಂದು ವೈದ್ಯರು ಕೈ ಚೆಲ್ಲಿಬಿಟ್ಟರು. ದಿನೇ ದಿನೇ ಅವಳ ಮನಸಲ್ಲಿ ನನಗೆ ಕಣ್ಣು ಬರುವುದಿಲ್ಲ ಎಂದುಕೊಳ್ಳುತೊಡಗಿದಳು. ಹೇಮಂತನನ್ನು ಕುರಿತು `ಥೂ, ಈ ಹಾಳು ಜೀವನ ಯಾರಿಗಾದರು ಬೇಕು. ಜೀವನ ಪರ್ಯಂತ ಕತ್ತಲಲ್ಲಿ ಬದುಕುವ ಕಷ್ಟದ ಜೀವನ ಯಾರಿಗೆ ಬೇಕು. ಹಗಲು ರಾತ್ರಿಯ ಪರಿವೆಯೂ ಕೂಡ ಇಲ್ಲದ ಈ ಜೀವನ ಯಾತಕ್ಕೆ ಬೇಕು. ಕುರುಡ, ಕಣ್ಣು ಕಾಣುವುದಿಲ್ಲ ಎನ್ನುವುದು ಗೊತ್ತಾದ ತಕ್ಷಣ ಗುಂಡಿಟ್ಟು ಕೊಂದು ಬಿಡಬೇಕು ಎಂದು ಗುಡುಗಿದಳು. ಬೇಸರ ವ್ಯಕ್ತಪಡಿಸಿ ಅತ್ತಳು. ಕೊನೆಗೆ ನನ್ನ ಜೀವನ ಇಷ್ಟೇ ಎನ್ನುವ ನಿಧರ್ಾರಕ್ಕೆ ಬಂದು ಮಂಕಾಗಿ ಬಿಟ್ಟಳು.
ಕೆಲವು ದಿನಗಳು ಕಳೆದವು. ಓಡಿ ಬಂದ ಹೇಮಂತ ನಾಳೆ ಆಸ್ಪತ್ರೆಗೆ ಹೋಗೋಣ. ಮಾರನೇ ದಿನವೇ ನಿನಗೆ ಕಣ್ಣಿನ ಆಪರೇಷನ್ ಮಾಡುತ್ತೇನೆ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ತಿಳಿಸಿದ. ವಿಷಯ ತಿಳಿದ ಭೂಮಿಕಾಳ ಸಂತಸಕಕೆ ಪಾರವೇ ಇರಲಿಲ್ಲ. ಅತ್ತಿತ್ತ ಸುತ್ತಾಡಿದ ಹೇಮಂತ ಹಾಗೂ ಹೀಗೂ ದುಡ್ಡು ಹೊಂದಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋದನು. ಭೂಮಿಕಾಳಿಗೆ ಕಣ್ಣು ಬರುವ ಸಂತಸ ಒಂದೆಡೆಯಿದ್ದರೆ, ಅವನ ಮುಖದಲ್ಲಿ ಕಣ್ಣಲ್ಲಿ ಒಂದು ತರಹದ ನಿಸ್ತೇಜತೆ ಎದ್ದು ಕಾಣುತ್ತಿತ್ತು. ಆಗ ಭೂಮಿಕಾಳನ್ನು ಕುರಿತು ಅಮ್ಮನಿಗೆ ಊರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರಂತೆ ಅವರನ್ನು ಕಾಣಬೇಕೆಂದು ಊರಿಂದ ಕರೆ ಬಂದಿದೆ. ಹೋಗಿ ಬೇಗ ಬರುತ್ತೇನೆ ಧೈರ್ಯವಾಗಿರು ಎಂದು ಸಮಾಧಾನ ಹೇಳಿ ಹೋದನು.
ಮರುದಿನವೇ ಭೂಮಿಕಾಳ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಯಿತು. ಆದರೆ ಹೋದ ಹೇಮಂತ ಬರಲೇ ಇಲ್ಲ. ದಿನಗಳು ಉರುಳಿದವು. ಕಣ್ಣಿನ ಪಟ್ಟಿ ಬಿಚ್ಚಬೇಕು ಎಂದು ಡಾಕ್ಟರ್ ಹೇಳಿದರು.ಹೇಮಂತನ ಸುಳಿವೇ ಇಲ್ಲ. ಅನಿವಾರ್ಯ ಅವನ ಅನುಪಸ್ಥಿತಿಯಲ್ಲಿಯೂ ಕಣ್ಣಿನ ಪಟ್ಟಿ ಕಳಚಲೇ ಬೇಕಾಗಿತ್ತು. ಹೀಗಾಗಿ ಡಾಕ್ಟರ್ ಬಿಚ್ಚಿಯೆ ಬಿಟ್ಟರು. ಆದರೆ ಹೇಮಂತ ಕಾಣಲಿಲ್ಲ. ಅವನಿಗಾಗಿ ಕಾದು ಕಾದು ಸಾಕಾಯಿತು. ಕೊನೆಗೆ ಡಿಸ್ಚಾಜರ್್ ಆಗಿ ಹೊರಡಲು ಅಣಿಯಾದರೂ ಹೇಮಂತ ಬರಲಿಲ್ಲ. ಆಗ ನಸರ್್ ಒಂದು ಪತ್ರವನ್ನು ಕೈಗೆ ಕೊಟ್ಟು ಹೋದಳು. ಬಿಚ್ಚಿ ಓದಿದರೆ ಆಘಾತ ಕಾದಿತ್ತು. `ಭೂಮಿಕಾ ನೀನು ದೇವಲೋಕದ ಅಪ್ಸರೆ. ನಿನ್ನಲ್ಲಿದ್ದ ಒಂದೇ ಒಂದು ಕೊರತೆ ಎಂದರೇ ದೃಷ್ಟಿ ಇಲ್ಲದಿರುವುದು. ನೀನು ಈ ಪತ್ರ ಓದುವ ಹೊತ್ತಿಗೆ ಬೆಳಕು ತುಂಬಿದ ಕಣ್ಣುಗಳಿಂದ ನಳನಳಿಸುತ್ತಿರುತ್ತೀಯಾ. ಇಲ್ಲಿಯವರೆಗೂ ನೀನು ಕತ್ತಲಲ್ಲಿ ಬದುಕಿ ಕುರುಡುತನಕ್ಕೆ ರೋಸಿ ಹೋಗಿದ್ದೀಯಾ. ಕುರುಡುತನದ ಮೇಲೆ ಮತ್ಸರವಿದೆ. ಹೀಗಾಗಿ ನೀನೊಬ್ಬ ಕುರುಡನ ಜೊತೆಗೆ ಬದುಕು ಸಾಗಿಸಲು ಸಾಧ್ಯವಾಗುವುದಿಲ್ಲ. ಬಿದಿಗೆ ಚಂದ್ರನಂತಿರುವ ನಿನ್ನ ಬಾಳಿನಲ್ಲಿ ಅಮಾವಾಸ್ಯೆ ಕತ್ತಲೆಯಂತೆ ನಾನು ಬರುವುದು ನಿನಗೆ ಇಷ್ಟವಾಗದಿರಬಹುದು ಎಂದು ಕೊಂಡು ನಿನ್ನಿಂದ ಬಹುದೂರ ಹೋಗುತ್ತಿದ್ದೇನೆ. ಆದರೆ ನಿನ್ನಲ್ಲಿ ಕ್ಷಮಿಸು. ಆದರೆ ನಿನ್ನಲ್ಲಿ ನನ್ನದೊಂದು ಸಣ್ಣ ಕೋರಿಕೆ. ನಡೆಸಿಕೊಡ್ತಿಯಲ್ವಾ? ಅದೇನ ಗೊತ್ತಾ? ಇಲ್ಲಿಯವರೆಗೂ ಜಗದ ಬೆಳಕಿನ ಸವಿ ಉಂಡ ನನ್ನ ಕಣ್ಣುಗಳು ಇಂದು ಪ್ರೀತಿಯ ಕಾಣಿಕೆಯಾಗಿ ನಿನಗೆ ನೀಡಿದ್ದೇನೆ. ಕಣ್ಗಳ ರೂಪದಲ್ಲಿ ಸದಾ ನಿನ್ನ ಜೊತೆ ಇರುತ್ತೇನೆ. ಸರಿಯಾಗಿ ನೋಡಿಕೊ ಚಿನ್ನು ಪ್ಲೀಸ್ ಎಂದು ಬರೆದ ಸಾಲುಗಳನ್ನು ಓದಿದ ತಕ್ಷಣ ಮೊದಲ ಬಾರಿಗೆ ಬೆಳಕು ಕಂಡುಕೊಂಡ ಕಣ್ಣುಗಳಿಂದ ಹನಿಗಳು ಧರೆಗಿಳಿದವು. ಅಷ್ಟರಲ್ಲಿ ಸುಂದರ ಮುಖದ ಕುರುಡನೊಬ್ಬ ನಡೆದು ಹೋದದ್ದು ಗೋಚರಿಸಿತು. ಅಂದಿನಿಂದ ಭೂಮಿಕಾ ತನ್ನ ಬಾಳಿಗೆ ಬೆಳಕು ನೀಡಿದ ಹೇಮಂತನ ಮುಖವನ್ನು ಪ್ರತಿ ಕುರುಡನ ಮುಖದಲ್ಲೂ ಹುಡುಕುತ್ತಿದ್ದಾಳೆ. ಇಲ್ಲಿಯವರೆಗೂ ಹೇಮಂತ ಸಿಗಲೇ ಇಲ್ಲ.... ಆ ಕಣ್ಗಳ ಹುಡುಕಾಟಕ್ಕೆ ಕೊನೆಯೇ ಇಲ್ಲ. ಕುರುಡು ಪ್ರೀತಿಯೆಂದರೆ ಇದೇನಾ