Thursday, January 6, 2011

ನೀನೆ ಬರೀ ನೀನೆ

ಎಡವಿ ಬೀಳುವಾಗ ಕೈಹಿಡಿದು
ನಡೆಸಿದವಳು ನೀನೆ
ಸುರಿವ ಹನಿಗಳನೋರೆಸಿ ಸಾಂತ್ವನ
ಇತ್ತವಳು ನೀನೆ
ಬಳವಿರದ ಮನಸಿನಲಿ
ಛಲ ತುಂಬಿದವಳು ನೀನೆ
ಹಸಿದು ಬಂದಾಗ ಚಂದದಿ
ಕಲೆಸಿ ಕೈತುತ್ತು ಕೊಟ್ಟವಳು ನೀನೆ
ಸಾಧಿಸುವ ಚಲದೊಂದಿಗೆ ಹೊರಟಾಗ
ಹಣೆಗೆ ಮುತ್ತನಿಟ್ಟವಳು ನೀನೆ
ಸಾಧಿಸಿ ಬರುವವನ ದಾರಿ ಕಾಯುತ್ತ
ನಿರೀಕ್ಷೆಯ ದೀಪ ಉರಿಸುತ್ತಿರುವವಳು ನೀನೇ
ಎಲ್ಲಕ್ಕೂ ಮಿಗಿಲಾಗಿ ನನ್ನ ಮನದ ತುಂಬ
ನೀನೆ ಬರೀ ನೀನೆ

1 comment:

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...