Tuesday, November 29, 2011

ಮಳೆಯ ಹನಿಗಳ ಮಧ್ಯೆ ಮರೆಯಾದ ಕಣ್ಣ ಹನಿಗಳು

ಮತ್ತೆ ಎಂದಿನಂತೆ ಇಂದು ಕೂಡ ಮನದಲ್ಲಿ ಮೃದಂಗ ಮಾರ್ಧನಿಸುತ್ತಿದೆ. ಅದಕ್ಕೂ ಒಂದು ಅದ್ಭುತವಾದ ಕಾರಣವಿರಲೇ ಬೇಕಲ್ಲ ಆಲ್ವಾ? ಹೌದು ಮೊದಲ ಮುಂಗಾರಿನ ಪ್ರಥಮ ಹನಿಗಳು ಒಂದೊಂದಾಗಿ ದರೆಗಿಳಿದು ಸಿಂಚನ ಮಾಡುತ್ತಿವೆ. ಅದೇ ಸಮಯಕ್ಕೆ ಸರಿಯಾಗಿ ನೀನು, ಜಡಿ ಮಳೆಯ ಸೋನೆಯಲಿ ಹುಡುಕಿ ಬಂದು ಮುಖಕ್ಕೆ ಮುತ್ತಿಡುತ್ತಿದ್ದ ಹನಿಗಳ ಆ ಮೃಧು ಸ್ಪರ್ಶಕ್ಕೆ ಮದುರವಾಗಿ ಕರಗುತ್ತಿದ್ದೆ.ಮಳೆಯ ಹನಿಗಳಿಗೆ ಸ್ಪರ್ಧೆ ಒಡ್ಡುವ ಹಾಗೆ ಮುಂಗುರುಳುಗಳು ಮುಂದೆ ಬರುತ್ತಿವೆ.ಬೇಡವೆಂದು ನೀ ಬದಿಗೊತ್ತಿದರು ರಚ್ಚೆ ಬಿಡದ ಮಗುವಿನ ಹಾಗೆ ಕೆನ್ನೆಕಚ್ಚಿತ್ತಿರುವಾಗ,ಹುಸಿ ಮುನಿಸು ತೋರುತ್ತ ನನ್ನೆದುರು ನೀನು ನಡೆದು ಬರುತ್ತಿದ್ದ ನಿನ್ನ ನೆನಪುಗಳು ಮತ್ತೆ ಮತ್ತೆ ಕೆನಕಿದಾಗಲೇ ಮನದ ಮೃದಂಗಕ್ಕೆ ಚಾಲನೆ ಸಿಗುವುದು.ಅಂದು ಮಣ್ಣಿನ ವಾಸನೆಯಲ್ಲಿ ಮನಸ್ಸು ಪುಳಕಗೊಂಡಿತ್ತು.ಅಂತಾದರ ನಡುವೆಯೇ ಆ ನಿನ್ನ ಸಣ್ಣ ನಗು ಪುಳಕಗೊಂಡ ಮನದಲ್ಲಿ ತನ್ನ ಜಲಕ್ಕು ತೋರಿಸಿದ್ದು.ಆದ್ರೆ ಅಂದಿನ ನಗು ಇಂದು ಇಲ್ಲ ಅಳುವ ಮನ ಮಾತ್ರ ನಿನ್ನ ನೆನಪಿಸಿಕೊಲ್ಲುತ್ತದೆ
ಇ ಹುಚ್ಚು ಮನಸ್ಸಿಗೆ ಅಷ್ಟೇ ಬೇಕಿತ್ತು, ಆ ಒಂದ್ಉ ನಗುವಿನ ಮೈಥುನಕ್ಕೆ ಭಾವನೆಗಳ ಗರ್ಭದಲ್ಲಿ ಕನಸ್ಸುಗಳು ಮೂಡತೊಡಗಿದವು.ಭ್ರೂನವಸ್ಥೆಯಿಂದ ಕನಸುಗಳು ಪ್ರೀತಿಯ ಮಗುವಾಗಿ ಮುಂದೆ ನನ್ನ ಜೋತೆಯಾಗಿರುತ್ತವೆ ಎಂದುಕೊಂಡೆ.ನನ್ನ ನಂಬಿಕೆಯ ತೇರು ಎಳೆಯುತ್ತ ಮುಂದೆ ಸಾಗಿದ ನನಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಎನ್ನುವಂತ ಒಂದು ಪುಟ್ಟ ಸುಳಿವು ಸಿಗಲಿಲ್ಲ.ಮನದಲ್ಲಿ ಕಟ್ಟಿಕೊಂಡಿದ್ದ ಕನಸುಗಳು ಪಲ್ಲವಿಸುವ ಮೊದಲೇ ನೀನು ಅಪಸ್ವರದ ಶ್ರುತಿ ಹಾಡಿಬಿತ್ತೆ.yes thats exctly my badluck.


ಇಂದು ಮೊದಲ ಮುಂಗಾರು ಮಳೆಯi ಹನಿ ನನ್ನ ಮುಖಕ್ಕೆ ತಾಗುತ್ತಿದ್ದಂತೆ ನಿನ್ನ ನೆನಪುಗಳ ಹಳೆಯ ರಾಗದ ವಿರಹದ ಆಲಾಪನೆ ಶುರುವಾಯಿತು.ಆಗಸದಿಂದ ಬೀಳುವ ಮಳೆಯ ಹನಿಗಳ ಮಧ್ಯದಲ್ಲಿ ನನ್ನ ಕಣ್ಣ ಹನಿಗಳು ಹಾಗೆ ಮಾಯವಾದವು.yes this is ಲೈಫ್



ಸುರಿವಾ ಮಳೆಯಲಿ ತಿಳಿಯದ ಹಾಗೆ



ಮರೆಸುವಾ ಕಂಬನಿ ಬಿಂದು



ನೆನೆದ ಕೆನ್ನೆಯ ಗಮನಿಸಿದೊರು



ಭ್ರಮಿಸಲಿ ಮಳೆ ಹನಿ ಎಂದು



ಹೀಗೆಯೇ ಸರಿಯಲು ಕಾರ್ಮುಗಿಲು



ಹಿಂದೆಯೇ ಕಾದಿದೆ ಹೊಂಬಿಸಿಲು



ಜೀವನದ ಪರಮ ಸತ್ಯವೆಂದರೆ ಇದೆ ಆಲ್ವಾ?




ನೆನಪಿನ ಈಗೆಯೇ ನಾವಿಕ ಪಾರ್ಥ

Thursday, November 10, 2011

ಇದರಲ್ಲಿ ತಪ್ಪೇನು ಹೇಳಿ?



ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸುವ ಇ ದಿನಮಾನಗಳಲ್ಲಿ ಒಂದು ಅರ್ಥಪೂರ್ಣ ಸಂಭಾಷಣೆಯನ್ನು ತಿಳಿಸುವ ಮೂಲಕ ಸಾರಥಿ ಚಿತ್ರ ಯುವಜನರ ಮನಸ್ಸಿಗೆ ಲಗ್ಗೆ ಇತ್ತಿದ್ದಂತು ನಿಜ.

ಕಾಣದೆ ಇರುವಂತ ಪ್ರೀತಿಗಾಗಿ ಹಂಬಲಿಸುವುದು ಸಾಮಾನ್ಯ .ಅದನ್ನೇ ಆಧರಿಸಿ ಬರೆದ ಇ ಸಾಲುಗಳು ನಿಜಕ್ಕೂ ಅನನ್ಯ.ಪ್ರೀತಿ ಕಾಣಲ್ಲ ನಿಜ ಆದ್ರೆ ಪ್ರೀತ್ಸೋಳು ಕಾಣಲ್ವಾ? ಪ್ರೀತಿ ಸಿಕ್ಕಿದ ಮೇಲೆ ಪ್ರೀತಿ ಸಿಗಲ್ವಾ? ಎನ್ನುವ ಸಾಲೆ ಯುವ ಜನರ ಪ್ರೀತಿಗೆ ಸ್ಪೂರ್ತಿ ಆದ್ರೆ ಅದರಲ್ಲಿ ತಪ್ಪೇನು ಆಲ್ವಾ

ನೆನಪಿನ ದೋಣಿಯ ನಾವಿಕ

Wednesday, November 9, 2011

ಹ್ಯಾಪಿ ಬರ್ತದೆ ಶಂಕ್ರಣ್ಣ








ಒಂದಾನೊಂದು ಕಾಲದಲ್ಲಿ ಆಟೋರಾಜನಾಗಿ ಮೆರೆದು


ನಲಿವಾ ಗುಲಾಬಿ ಹೂವೆ ಹಾಡಿನ ಮೂಲಕ


ಪ್ರೇಮಿಗಳ ಮನದಾಳದಲ್ಲಿಳಿದು


ಕನ್ನಡದ ಮುತ್ತುರಾಜನನ್ನು


ಒಂದು ಮುತ್ತಿನ ಕತೆಯಲ್ಲಿ ಎತ್ತಿ ಹಿಡಿದು


ನ್ಯಾಯ ಎಲ್ಲಿದೆ ?ಎಂದು ಕೇಳಿದವರಿಗೆ


ನೋಡಿ ಸ್ವಾಮೀ ನಾವಿರೋದೆ ಹೀಗೆ ಎಂದು ನುಡಿದು


ಬಾಳಿನ ಅಂತಿಮ ಘಟ್ಟದವರೆಗೂ


ಮಿಂಚಿನ ಓಟದಿ ಮಿಂಚಿದ ದ್ರುವ ತಾರೆ ನೀನು


ನಿನ್ನ ಅಗಲುವಿಕೆಯ ನೋವಿನಲ್ಲಿಯು


ನಿನ್ನ ಹುಟ್ಟು ಹಬ್ಬವನ್ನು ಆಚರಿಸುವ ಅನಿವಾರ್ಯತೆ


ಮತ್ತೊಮ್ಮೆ ಹುಟ್ಟಿ ಬಾ ಎನ್ನುತ್ತಿದೆ ಕನ್ನಡದ ಜನತೆ



ನಿನ್ನ ಪ್ರೀತಿಯ ಅಭಿಮಾನಿ





Tuesday, November 8, 2011

ಮತ್ತೆ ನಿನ್ನಾಷೆಯಂತೆ ಬರುತ್ತೇನೆ

ಡಿಯರ್ ಸೋನು ,
ಇಂದು ಮನಸ್ಸು ಅಂದಿನಂತೆ ಅಳುತ್ತಿಲ್ಲ.ಮೊದಲಿದ್ದ ಸ್ಥಿತಿ ಇಂದು ತಿಳಿಯಾಗಿದೆ.ಹಳೆಯ ಘಟನೆಯನ್ನು ಸಹಿಸಿಕೊಂಡು ಕಣ್ಣಿರು controll ಗೆ ಬಂದಿದೆ.ಸಧ್ಯಕ್ಕಂತೂ ಎಲ್ಲ ಸ್ಥಿತಿಗಳನ್ನು ಅರಗಿಸಿಕೊಳ್ಳುವ ಶಕ್ತಿ ನನ್ನಲ್ಲಿ ಬಂದಿದೆ.

ಅಂದು ಸುಮ್ಮನೆ ಹೊರಟವನ ಬೆನ್ನು ತಟ್ಟಿ ಸ್ನೇಹದ ಸಂದೇಶ ರವಾನಿಸಿದೆ .ಮೊದಲೇ ಖಾಲಿಯಾಗಿದ್ದ ಮನಸ್ಸು, ನಿನ್ನ ಸ್ನೇಹದ ತರಂಗಗಳಿಂದ ಕಂಪಿಸತೊಡಗಿತು.ಪ್ರಪಂಚದಲ್ಲಿ ನಮ್ಮಂತ ಸ್ನೇಹಿತರು ಯಾರು ಇಲ್ಲ ಎನ್ನುವ ಮಟ್ಟಕ್ಕೆ ಬೆಳೆದ ಆ ಸ್ನೇಹ ಪ್ರೀತಿಯ ರೂಪಕ್ಕೆ ತಿರುಗುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ.ಪವಿತ್ರ ಪ್ರೀತಿಗೆ ಸೋಲೇ ಇಲ್ಲ ಎನ್ನುವ ಮಾತನ್ನು ನಂಬಿದ್ದ ನಾನು ನಿನ್ನಲ್ಲಿಯೇ ನನ್ನ ಭವಿಷ್ಯದ ಚಿತ್ರಣ ಹುಡುಕಲು ಶುರುವಿತ್ತುಕೊಂಡೆ.ಅದಕ್ಕೆ ಕಾರಣವು ಇತ್ತು ಸತ್ತ ಕನಸುಗಳಿಗೆ ಮತ್ತೆ ಚೇತನ ತುಂಬುವ ಶಕ್ತಿ ನಿನ್ನಲ್ಲಿತ್ತು.ಅದೇ ಇಂದು ನನ್ನ ಜೀವನವನ್ನು ಒಂದು ultimate ಆಘಾತಕ್ಕೆ ಒಡ್ಡುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ.


ನೀನು ನುಡಿಯುತ್ತಿದ್ದ ಭರವಸೆಯ ಮಾತುಗಳು ಸುರಿಸುತ್ತಿದ್ದ sms ನ ಮಳೆ ದಿನ ದಿನವು ನನ್ನಲ್ಲಿ ಒಂದು ಹೊಸ ಕನಸ್ಸಿಗೆ ಜನ್ಮ ನೀವುತ್ತಿದ್ದವು. ಕಾಲಾ ಕಳೆದಂತೆ ಧಾರಾಕಾರವಾಗಿ ಸುರಿಯುತ್ತಿದ್ದ sms ಮಳೆ ನಿಧಾನವಾಗಿ ಜಡಿ ಮಳೆಯಾಗಿ ಪರಿವರ್ತನೆಯಾಯಿತು.ಮಾತುಗಳಲ್ಲಿನ ಪ್ರೀತಿ ಮಾಯವಾಗುತ್ತಾ ಸಾಗಿತು.ಕಾರಣ ಹುಡುಕುತ್ತ ಹೊರಟರೆ ನಾನೊಬ್ಬ ನಿರುದ್ಯೋಗಿ,ಬೇಜವಾಬ್ದಾರಿ ವ್ಯಕ್ತಿ ಎನ್ನುವುದು.ಗೆಳತಿ ನಿನ್ನ ದೃಷ್ಟಿ ಸರಿಯಾಗಿದೆ.ಹೌದು ಜವಾಬ್ದಾರಿ ಇಲ್ಲದ ವ್ಯಕ್ತಿ ನಿನ್ನನ್ನು ಸಾಕಲು ಸಾಧ್ಯವಿಲ್ಲ .ಬದುಕಲ್ಲಿ ಅಮ್ಮನ ನಂತರದ ಸ್ಥಾನ ನಿನಗೆ ನೀಡಿರುವೆ.ಅಂದಮೇಲೆ ಸಾಧನೆಯ ಮಾತು ಅಸಾಧ್ಯವೇನಲ್ಲ .ಮನಸ್ಸಿನ ಹೊಸ್ತಿಲ ಮೇಲೆ ನಿರೀಕ್ಷೆಯ ಡೀಪ್ ಉರಿಸು ಸ್ವಂತ ದುಡಿಮೆಯಲ್ಲಿ ಬಂದು ನಿನ್ನೆದುರು ನಿಲ್ಲುತ್ತೇನೆ


ನಿನ್ನ ಪ್ರೀತಿಯ ನೆನಪಿನ ದೋಣಿಯ ನಾವಿಕ





ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...